ಕಾಲಿವುಡ್ ಇಂಡಸ್ಟ್ರಿಯ ಈ ಸ್ಟಾರ್ ನಟರಿಗೆ ರೆಡ್ ಕಾರ್ಡ್ ನೀಡಿದ ಚಿತ್ರರಂಗ
ನಿರ್ಮಾಪಕರಿಗೆ ಸಹಕರಿಸದ ಕಾರಣ ನಾಲ್ವರು ಸ್ಟಾರ್ ಹೀರೋಗಳಿಗೆ ರೆಂಡ್ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ
ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ಸಂಚಲನಕಾರಿ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾಲ್ವರು ಸ್ಟಾರ್ ಹೀರೋಗಳಿಗೆ ರೆಂಡ್ ಕಾರ್ಡ್ ನೀಡಲು ತೀರ್ಮಾನಿಸಲಾಗಿದೆ. ನಿರ್ಮಾಪಕರಿಗೆ ಸಹಕರಿಸದ ಕಾರಣ ನಾಯಕರಾದ ಧನುಷ್, ಸಿಂಬು, ವಿಶಾಲ್ ಮತ್ತು ಅಥರ್ವ ಮುರಳಿ ಅವರನ್ನು ನಿಷೇಧಿಸಿದೆ. ಇನ್ಮುಂದೆ ಈ ನಾಲ್ವರು ಹೀರೋಗಳು ಸಿನಿಮಾದಲ್ಲಿ ನಟಿಸದೇ ಇರುವಂತೆ ರೆಡ್ ಕಾರ್ಡ್ ಕೊಡಲು ನಿರ್ಧರಿಸಿದ್ದಾರೆ.
ಹೀರೋ ಶಿಂಬು ವಿಚಾರದಲ್ಲಿ ನಿರ್ಮಾಪಕ ಮೈಕಲ್ ರಾಯಪ್ಪನ್ ಜೊತೆಗಿನ ವಿವಾದದಿಂದಾಗಿ ವಿಶಾಲ್ ಅವರು ನಿರ್ಮಾಪಕ ಸಂಘದ ಅಧ್ಯಕ್ಷರಾಗಿದ್ದಾಗ ಹಣ ದುರುಪಯೋಗದ ಆರೋಪ, ತೆನಾಂಡಾಲ್ ನಿರ್ಮಾಣ ಸಂಸ್ಥೆ ಮಾಡಿದ ಚಿತ್ರಕ್ಕೆ ಧನುಷ್ ಸಹಕರಿಸಲಿಲ್ಲ ಎಂಬ ಆರೋಪ, ಧನುಷ್ ಮಡಿಯಾಳಕನ್ ನಿರ್ಮಾಣ ಸಂಸ್ಥೆಯೊಂದಿಗೆ ಚಿತ್ರದ ಚಿತ್ರೀಕರಣದ ವೇಳೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು. ಈ ನಾಲ್ವರಿಗೆ ಈಗ ರೆಡ್ಕಾರ್ಡ್ ನೀಡಲಾಗುವುದು ಎಂಬ ಮಾಹಿತಿ ಹರಿದಾಡುತ್ತಿದೆ.
ಈ ನಾಲ್ವರ ಜತೆಗೆ ನಿರ್ಮಾಪಕರಿಗೆ ಸಹಕಾರ ನೀಡದ ಇನ್ನು ಕೆಲ ನಟರಿಗೂ ರೆಡ್ ಕಾರ್ಡ್ ನೀಡಲು ನಿರ್ಮಾಪಕರ ಸಂಘ ನಿರ್ಧರಿಸಿದೆ. ನಟ ನಿರ್ದೇಶಕ ಎಸ್.ಜೆ.ಸೂರ್ಯ, ನಟ ವಿಜಯ್ ಸೇತುಪತಿ, ನಟಿ ಅಮಲಾ ಪೌಲ್, ಹಾಸ್ಯನಟ ವಡಿವೇಲು, ನಟಿ ಊರ್ವಶಿ ಮತ್ತು ನಟಿ ಸೋನಿಯಾ ಅಗರ್ವಾಲ್ ಸೇರಿದಂತೆ 14 ಜನ ನಟರು ಪಟ್ಟಿಯಲ್ಲಿದ್ದಾರೆ ಎಂದು ವರದಿಯಾಗಿದೆ.
Comments are closed.