ಇಂಥವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡುವ ಪ್ರಕ್ರಿಯೆ ಶುರು ಮಾಡಿದ ಸರ್ಕಾರ, ಜನರಿಗೆ ಬಿಗ್ ಶಾಕ್
ಸ್ವಂತ ಕಾರ್ ಇರುವವರ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುವುದಾಗಿ ಸರ್ಕಾರ ಸೂಚಿಸಿದ್ದು , ಈಗಾಗಲೇ ಇದಕ್ಕೆ ಸಂಬಂಧಿಸಿದ ಹಾಗೆ ಸರ್ವೇ ಶುರುವಾಗಿದೆ.
ಇತ್ತೀಚೆಗೆ ರೇಶನ್ ಕಾರ್ಡ್ (Ration card) ವಿಚಾರದಲ್ಲಿ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿತ್ತು. ಸುಳ್ಳು ದಾಖಲೆ, ಸುಳ್ಳು ಮಾಹಿತಿ ನೀಡಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ, ಬಿಪಿಎಲ್ (BPL) ರೇಷನ್ ಕಾರ್ಡ್ ಪಡೆದಿರುವವರ ರೇಶನ್ ಕಾರ್ಡ್ ಕ್ಯಾನ್ಸಲ್ ಮಾಡುವುದಾಗಿ ಹೇಳಿತ್ತು.
ಇದರಲ್ಲಿ ಮುಖ್ಯ ವಿಚಾರ, ಸ್ವಂತ ಕಾರ್ ಇರುವವರ ಅದರಲ್ಲು ವೈಟ್ ಬೋರ್ಡ್ ಕಾರ್ (White Board Car) ಇರುವವರ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುವುದಾಗಿ ಸರ್ಕಾರ ಸೂಚನೆ ನೀಡಿತ್ತು..
ಇದೀಗ ವೈಟ್ ಬೋರ್ಡ್ ಕಾರ್ ಇರುವವರ ಬಿಪಿಎಲ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡುವ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದ ಹಾಗೆ ಸರ್ವೇ ಶುರುವಾಗಿದೆ. ಹಾಗೆಯೇ ಇನ್ನು ಕೆಲವು ಜನರಿಗೆ ಅನ್ನಭಾಗ್ಯ ಯೋಜನೆಯ (Annabhagya Yojane) ಪರಿಹಾರ ಹಣ ಕೂಡ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಅನ್ನಭಾಗ್ಯ ಯೋಜನೆ ಬಗ್ಗೆ ಸರ್ಕಾರ ಹೇಳಿದ್ದು ಏನು ಎಂದರೆ, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ (Antyodaya card) ಇರುವವರಿಗೆ ಪ್ರತಿ ವ್ಯಕ್ತಿಗೆ 5ಕೆಜಿ ಅಕ್ಕಿ ಜೊತೆಗೆ ಇನ್ನು 5 ಕೆಜಿಯ ಹಣ ₹170 ರೂಪಾಯಿಯನ್ನು ಮನೆಯ ಮುಖ್ಯಸ್ಥರ ಬ್ಯಾಂಕ್ ಅಕೌಂಟ್ (Bank account) ಗೆ ಡೆಪಾಸಿಟ್ ಮಾಡಲಾಗುವುದು ಎಂದು ಸರ್ಕಾರ ತಿಳಿಸಿತ್ತು.
ಆ ಕೆಲಸ ನಡೆಯುವುದರ ಜೊತೆಗೆ, ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ವೈಟ್ ಬೋರ್ಡ್ ಕಾರ್ಡ್ ಜನರ ಬಳಿ ಇದ್ದರೆ, ಅಂಥವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಮಾಡಿಸಲು, ಸರ್ವೇ ಕೆಲಸ ಶುರುವಾಗಿದೆ. ಸ್ವಂತ ವೈಟ್ ಬೋರ್ಡ್ ಕಾರ್ ಹೊಂದಿರುವವರಿಗೆ ಸರ್ಕಾರದ ಸೌಲಭ್ಯ ಸಿಗುವುದಿಲ್ಲ.
ಅಂದರೆ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲಾಗುತ್ತದೆ. ಈ ನಿಯಮ ಮೊದಲಿನಿಂದಲೂ ಇದೆ, ಆದರೆ ಈಗ ಕಠಿಣವಾಗಿ ಜಾರಿಗೆ ತರಲು ನಿರ್ಧಾರ ತೆಗೆದುಕೊಂಡಿದೆ ಸರ್ಕಾರ.
ಇದಕ್ಕೆ ಸಂಬಂಧಿಸಿದ ಕೆಲಸಗಳು ಇನ್ನು ಒಂದು ತಿಂಗಳಲ್ಲಿ ನಡೆಯಲಿದೆ. RTO ಕಛೇರಿಗಳಿಂದ ಕಾರ್ ಹೊಂದಿರುವ ಎಲ್ಲಾ ಜನರ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಜೊತೆಗೆ ಆದಾಯ ತೆರಿಗೆ ಇಲಾಖೆಯಲ್ಲಿ ಟ್ಯಾಕ್ಸ್ ಕಟ್ಟುತ್ತಿರುವ ಜನರ ಮಾಹಿತಿಯನ್ನು ಕೂಡ ಪಡೆಯಲಾಗುತ್ತದೆ..
ಇತ್ತ ಅನ್ನಭಾಗ್ಯ ಯೋಜನೆಯ ಹಣವು ಸಾಕಷ್ಟು ಜನರನ್ನು ತಲುಪಿದೆ, ಆದರೆ 10 ಲಕ್ಷ ಜನರು ಇನ್ನು ಅನ್ನಭಾಗ್ಯ ಯೋಜನೆಯ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ ಅಕೌಂಟ್ ಸಕ್ರಿಯವಾಗಿ ಇಲ್ಲದೆ ಇದ್ದಾಗ, ಆಧಾರ್ ಕಾರ್ಡ್ ಗೆ (Adhar card) ಬ್ಯಾಂಕ್ ಅಕೌಂಟ್ ಲಿಂಕ್ ಆಗದೆ ಇದ್ದಾಗ ಈ ಥರ ಆಗಿರುವವರಿಗೆ ಅನ್ನಭಾಗ್ಯ ಯೋಜನೆಯ ಹಣ ಇನ್ನು ಜಮೆ ಆಗಿಲ್ಲ. ಇದೆಲ್ಲವೂ ಸರಿ ಹೋದ ಮೇಲೆ ಹಣ ಬರುತ್ತದೆ ಎಂದು ಸರ್ಕಾರ ತಿಳಿಸಿದೆ.
ಇದೀಗ ಸರ್ಕಾರವು ವೈಟ್ ಬೋರ್ಡ್ ಕಾರ್ ಇರುವವರ ಮಾಹಿತಿ ಪಡೆಯಲು ಸರ್ವೇ ಮಾಡುವ ಕೆಲಸವನ್ನು ಸ್ಟ್ರಿಕ್ಟ್ ಆಗಿ ಮಾಡುತ್ತಿದ್ದು, ಈ ವರ್ಷವೇ ಎಲ್ಲವು ನಡೆದರೆ, ಎಷ್ಟು ಜನರ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂದು ಕಾದು ನೋಡಬೇಕಿದೆ.